Tuesday, November 26, 2013

ಕಟೀಲು ಪ್ರಮೋದ್ ಮುತಾಲಿಕ್ ಭೇಟಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಶ್ರೀ ರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಮಂಗಳವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Sunday, November 24, 2013

katilige shilpa shetty beti


ದೀಪೋತ್ಸವ

ಕಟೀಲು ಶ್ರೀ ದುರ್ಗಾಪರಮೇಶದ್ವರೀ ದೇಗುಲದಲ್ಲಿ ದೀಪೋತ್ಸವ ನಡೆದ ಸಂದರ್ಭ ಹಣ್ಣುಗಳು, ತರಕಾರಿಗಳಿಂದ ನಿರ್ಮಿಸಿದ ಮಂಟಪದಲ್ಲಿ ದೇವರನ್ನು ಪೂಜಿಸಲಾಯಿತು. (ಸ.೨೨)
ಚಿತ್ರ ಕಟೀಲ್ ಸ್ಟುಡಿಯೋ

Friday, November 8, 2013

ಕಟೀಲು ಆರನೆಯ ಮೇಳ ಉದ್ಘಾಟನೆ

ದೇವೀ ಭಕ್ತಿ, ಕಲಾ ಪ್ರೀತಿಯಿಂದ ಸಂಸ್ಕೃತಿಯ ಉಳಿವು-ಪೇಜಾವರ ಶ್ರೀ
ಕಟೀಲು : ಯಕ್ಷಗಾನ ಪ್ರಪಂಚದ ಅದ್ಭುತವೆನಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಮಂಡಳಿಯ ಆರನೆಯ ಮೇಳದ ಉದ್ಘಾಟನೆ ಹಾಗೂ ಎಲ್ಲ ಮೇಳಗಳ ಈ ವರುಷದ ತಿರುಗಾಟದ ಆರಂಭ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವೈಭವದಿಂದ ನಡೆಯಿತು.
ಸಂಜೆ ಕ್ಷೇತ್ರದ ಅರ್ಚಕರಾದ ಆಸ್ರಣ್ಣ ಬಂಧುಗಳಾದ ವಾಸುದೇವ, ಅನಂತಪದ್ಮನಾಭ, ವೆಂಕಟರಮಣ, ಕಮಲಾದೇವೀ ಪ್ರಸಾದ, ಶ್ರೀಹರಿನಾರಾಯಣದಾಸ, ಮೇಳದ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಆಡಳಿತಾಧಿಕಾರಿ ಅಜಿತ್ ಕುಮಾರ ಹೆಗ್ಡೆ, ದೇಗುಲದ ತಂತ್ರಿಗಳಾದ ವೇದವ್ಯಾಸ ತಂತ್ರಿ ಸೇರಿದಂತೆ ನೂರಾರು ಮಂದಿ ಭಕ್ತರ ಉಪಸ್ಥಿತಿಯಲ್ಲಿ ದೇವರ ಸಮ್ಮುಖದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣ ಆರೂ ಮೇಳಗಳ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ತಿರುಗಾಟಕ್ಕೆ ಚಾಲನೆ ನೀಡಿದರು. ಇದಕ್ಕಿಂತ ಮೊದಲು ಮೇಳದ ಭಾಗವತರಾದ ಪದ್ಯಾಣ ಗೋವಿಂದ ಭಟ್, ಬಲಿಪ ಪ್ರಸಾದ ಭಟ್, ಗೋಪಾಲಕೃಷ್ಣ, ಮಯ್ಯ,  ಕುಬಣೂರು ಶ್ರೀಧರ ರಾವ್, ಪಟ್ಲ ಸತೀಶ ಶೆಟ್ಟಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ ಹಿಮ್ಮೇಳ ಕಲಾವಿದರಿಂದ ದೇವರ ಎದುರು ತಾಳಮದ್ದಲೆ ನಡೆಯಿತು. ಬಳಿಕ ಸರಸ್ವತೀ ಸದನದಲ್ಲಿ ಮೇಳದ ದೇವರಿಗೆ ಮುನ್ನೂರು ಕಲಾವಿದರ ಉಪಸ್ಥಿತಿಯಲ್ಲಿ ಚೌಕಿಪೂಜೆ ನಡೆಯಿತು.
ಉದ್ಘಾಟನೆ
ಪೇಜಾವರ ಮಠದ ಶ್ರೀ ವಿಶ್ವೇಶತೀಥ ಸ್ವಾಮೀಜಿ ಶ್ರೀ ದೇವೀ ಭಕ್ತಿ ಹಾಗೂ ಯಕ್ಷಗಾನದ ಮೇಲಿನ ಪ್ರೀತಿಯಿಂದ ಕಟೀಲಿನಲ್ಲಿ ಯಕ್ಷಗಾನ ಮೇಳಗಳು ಆರಕ್ಕೇರಿವೆ. ಆ ಮೂಲಕ ಸಂಸ್ಕೃತಿಯ ಔನತ್ಯವನ್ನು ಹೆಚ್ಚಿಸಿದಂತಾಗಿದೆ. ಈ ಕಾಲದಲ್ಲೂ ದೇವರ ಮೇಲಿನ ಭಕ್ತಿ ಹೆಚ್ಚಾಗಿದೆ. ಕಲೆಯ ಬಗೆಗಿನ ಪ್ರೀತಿ ಹೆಚ್ಚಾಗಿದೆ ಎಂದು ಹೇಳಬಹುದು. ಧರ್ಮ ಪ್ರಸಾರದ ಜೊತೆಗೆ ಒಳಿತನ್ನು ಸಾರುವ ಯಕ್ಷಗಾನ ಎಂದರೆ ಅದು ದೇವರಿಗೆ ಮಾಡುವ ನೃತ್ಯ, ಸಂಗೀತ ಆರಾಧನೆ. ಯಕ್ಷಗಾನ ಮೇಳಗಳಿಗೆ ಕಟೀಲು ಸೇನಾಧಿಪತಿಯಂತೆ ಇದೆ. ಅನೇಕ ಮೇಳಗಳಿಗೆ ಆಟಗಳು ಸಿಗುವುದಿಲ್ಲ. ಆದರೆ ಕಟೀಲು ಮೇಳಗಳಿಗೆ ಪುರುಸೊತ್ತೇ ಇಲ್ಲ ಎಂಬ ಸ್ಥಿತಿ.ಭಕ್ತರ ಹೃದಯ ರಂಗಸ್ಥಳದಲ್ಲಿ ಕಲೆ ಮತ್ತು ದೇವರು ಯಕ್ಷಗಾನದ ಮೂಲಕ ಸ್ಥಿರವಾಗಿ ನಿಲ್ಲುವಂತಾಗಲಿ. ಕಟೀಲಿನಲ್ಲಿ ಆಟ, ಊಟ, ಪಾಠದ ಕಾರ‍್ಯಗಳು ನಿರಂತರವಾಗಿ ನಡೆಯಲಿ ಎಂದು ಹೇಳಿದರು,

ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ಮಾಲತಿ ಮೊಯ್ಲಿ ಆರನೆಯ ಮೇಳ ಉದ್ಘಾಟಿಸಿದರು. ಡಾ.ವೀರೇಂದ್ರ ಹೆಗ್ಗಡೆ, ಸಚಿವ ವಿನಯಕುಮಾರ ಸೊರಕೆ, ಮಾಣಿಲ ಸ್ವಾಮೀಜಿ, ಸಾಂಸದ ನಳಿನ್ ಕುಮಾರ್, ಆಸ್ರಣ್ಣ ಬಂಧುಗಳು ವೇದಿಕೆಯಲ್ಲಿದ್ದರು. ಮಳೆಗಾಲದಲ್ಲೂ ಕಾಲಮಿತಿಯ ಮೇಳ ಆರಂಭವಾಗಲಿದ್ದು, ೭೦ವರ್ಷ ಮೀರಿದವರು ಆಟ ನೋಂದಾಯಿಸಿದರೆ ಕೂಡಲೇ ಅವಕಾಶ ನೀಡಲಾಗುವುದು. ೮೫೦೦ಯಕ್ಷಗಾನ ಮುಂಗಡ ನೋಂದಾವಣೆಯಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಹತ್ತು ಮೇಳಗಳನ್ನು ಮಾಡುವ ಮನಸ್ಸು ಇದೆ ಎಂದು ಅಜಿತ್ ಕುಮಾರ ಹೆಗ್ಡೆ ಹೇಳಿದರು. ಬಾಲಕೃಷ್ಣ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.
photo by katil studio

Monday, November 4, 2013

katil yakshagana melagala tirugata mattu 6neya mela udgatane




ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಗಳ ಈ ವರುಷದ ತಿರುಗಾಟ ಆರಂಭ ಹಾಗೂ ಆರನೆಯ ಮೇಳದ ಉದ್ಘಾಟನೆ 8-11-2013ರಂದು ನಡೆಯಲಿದೆ. ಆರನೆಯ ಯಕ್ಷಗಾನ ಮೇಳ ಒಂದೇ ಕ್ಷೇತ್ರದಿಂದ ಹೊರಡುತ್ತಿರುವುದು ಗಿನ್ನಿಸ್ ದಾಖಲೆಯೇ ಸರಿ.

ಕಡಂದೇಲು ಪುರುಷೋತ್ತಮ ಭಟ್ಟರಿಗಿಂದು ಗೌರವ



ಈಗಿರುವ ಯಕ್ಷಗಾನ ಕಲಾವಿದರಲ್ಲಿ ಅತ್ಯಂತ ಹಿರಿಯರೆನಿಸಿರುವ ದೇವಿ ಪಾತ್ರಧಾರಿ ಎಂದೇ ಪ್ರಸಿದ್ಧರಾದ ನೂರರ ಆಸುಪಾಸಿನಲ್ಲಿರುವ ಕಡಂದೇಲು ಪುರುಸೋತ್ತಮ ಭಟ್ಟರಿಗೆ ಇಂದು(ತಾ.೫) ಕಟೀಲು ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಲಿರುವ ಶಾಂತಿಹೋಮಹವನಾಧಿಗಳ ಜೊತೆಗೆ ಗೌರವ ನಡೆಯಲಿದೆ. ಪೇಜಾವರ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧೀಶರು ಭಾಗವಹಿಸಲಿದ್ದಾರೆ.
ಪುರುಷೋತ್ತಮ ಭಟ್ಟರಿಗೆ ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಬೆಳುವಾಯಿಯ ಶ್ರೀ ಯಕ್ಷ ದೇವ ಪ್ರಶಸ್ತಿ, ಕಟೀಲು ದೇವಸ್ಥಾನ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಓಂ ಮಾಯಲೀಲಾ, ಭಾಮಿನೀ ಷಟ್ಪದಿ ಯಲ್ಲಿ ’ಶ್ರೀ ದೇವಿ ಸ್ತುತಿ’ ಕೃತಿ ಪ್ರಕಟಿಸಿದ್ದಾರೆ. ಕಟೀಲು ದುರ್ಗೆಗೆ ಸಂಬಂಧಿಸಿದ ಭಕ್ತಿಗೀತೆ ಗಳ ಸಿಡಿ ಬಿಡುಗಡೆಯಾಗಿದೆ. ಮೂಲ್ಕಿ ಕೊರಕ್ಕೋಡು, ಕೂಡ್ಲು, ಇರಾ ಕುಂಡಾವು ಮೇಳಗಳಲ್ಲಿ ಬಳಿಕ ಕಟೀಲು ಮೇಳದಲ್ಲಿ ತಿರುಗಾಟ ಮಾಡಿದ ಪುರುಷೋತ್ತಮ ಭಟ್ಟರು ಕಿನ್ನಿಗೋಳಿಯಲ್ಲಿ ೧೯೪೩ರಲ್ಲಿ ಐದು ದಿನದ ದೇವಿ ಮಹಾತ್ಮೆ ನಡೆದಾಗ ದೇವೀ ಪಾತ್ರಧಾರಿಯಾಗಿ ಪ್ರಸಿದ್ಧಿಗೆ ಬಂದವರು. ಇವತ್ತಿಗೂ ಮೂರ‍್ನಾಲ್ಕು ಕಿಲೋಮೀಟರ್ ನಡೆದುಕೊಂಡು ಹೋಗಿ ಬರುವ ಭಟ್ಟರು ದೇವಿ, ಕೈಕೆ, ಶಕುಂತಲೆ, ಅಂಬೆ, ಮಂಡೋದರಿ, ಚಂದ್ರಮತಿ, ಸೀತೆ, ದ್ರೌಪದಿ, ಚಿತ್ರಾಂಗದೆ ಮುಂತಾದ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದರು. ೧೯೭೦ ರ ಮೇ ೨೫ ರಂದು ಮೇಳಕ್ಕೆ ವಿದಾಯ ಹೇಳಿದರು. ಪೇಜಾವರ ಮಠದ ಹಿರಿಯ ಸ್ವಾಮೀಜಿ ಒಮ್ಮೆ ಆಟಕ್ಕೆ ಬಂದಿದ್ದರು. ರಾಮ ವನವಾಸಕ್ಕೆ ಹೋಗಬೇಕಾಗಿ ಬರುವ ಸಂದರ್ಭ, ಭಟ್ಟರು ಕೈಕೆಯಾಗಿ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಭಾಗ ಮುಗಿದು ಹೊರಡುವ ವೇಳೆ ಸ್ವಾಮೀಜಿ ಕರೆದು ಹೇಳಿದರು. ’ಕಲ್ಲು ಸಿಗಲಿಲ್ಲ’ ಇಲ್ಲದಿದ್ದರೆ ಹೊಡೆಯುತ್ತಿದ್ದೆ ಎಂದರು. ಬಹುಶಃ ಕೈಕೆ ಪಾತ್ರ ಅಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿರಬೇಕು ಎಂದು ಖಷಿಪಟ್ಟುಕೊಳ್ಳುವ ಪುರುಷೋತ್ತಮ ಭಟ್ಟರು ರಾಮ, ವಲಲ, ಚಂಡಾಮರ್ಕ, ಬ್ರಹ್ಮಕಪಾಲದ ಬ್ರಹ್ಮ, ವಿಶ್ವಾಮಿತ್ರ, ದೂರ್ವಾಸ ಮುಂತಾದ ಪುರುಷ ಪಾತ್ರಗಳನ್ನೂ ನಿರ್ವಹಿಸಿದವರು. ಇಂತಹ ಕಡಂದೇಲು ಪುರುಷೋತ್ತಮ ಭಟ್ಟರಿಗೆ ಮುಕ್ಕಾಲು ಶತಮಾನದ ಹಿಂದಿನ ಯಕ್ಷಗಾನ ಪ್ರಪಂಚದ ಸಾಕ್ಷಿಯಾಗಿ ಇವತ್ತಿಗೂ ಅನೇಕ ಸಂಗತಿಗಳನ್ನು ಹೇಳುವ ಮಾಹಿತಿ ಕಣಜ. ಅವರಿಗಿಂದು ಕಟೀಲಿನಲ್ಲಿ ಶಾಂತಿ ಹೋಮಹವನಗಳ ಜೊತೆಗೆ ಕುಟುಂಬದ, ಅಭಿಮಾನಿಗಳ ಆತ್ಮೀಯ ಗೌರವ ಸಲ್ಲಲಿದೆ.