Monday, October 29, 2012

ಎಚ್.ಡಿ.ಕುಮಾರಸ್ವಾಮಿ ಭೇಟಿ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸೋಮವಾರ ಮಾಜಿ ಮುಖ್ಯಮಂತ್ರಿ ಜೆಡಿಸ್‌ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣರಿಂದ ಪ್ರಸಾದ ಸ್ವೀಕರಿಸಿದರು.
ಮಧು ಬಂಗಾರಪ್ಪ, ಎಂ.ಬಿ.ಸದಾಶಿವ, ಚೆಲುವರಾಯ ಸ್ವಾಮಿ, ನಾಗರಾಜ ಶೆಟ್ಟಿ, ಸಂಜೀವ ಮಡಿವಾಳ ಮುಂತಾದವರಿದ್ದರು.


Wednesday, October 24, 2012

ಕಟೀಲಿನಲ್ಲಿ ಅಕ್ಷರಾಭ್ಯಾಸ, ದಾಖಲೆಯ ವಾಹನ ಪೂಜೆ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ವಿಜಯದಶಮೀಯಂದು ಬುಧವಾರ ೨೦೧ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು. ಮಂಗಳವಾರದಂದು ಒಟ್ಟು ೧೩೨೦ವಾಹನಗಳ ಪೂಜೆ ನಡೆಯಿತು. ಬಜಪೆ ಪೋಲೀಸರು ವಾಹನ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರಿಂದ ವಾಹನ ಬ್ಲಾಕ್ ಆಗಲಿಲ್ಲ. ಐದು ಮಂದಿ ವಾಹನ ಪೂಜೆ ಮಾಡಲು ನಿಯುಕ್ತರಾಗಿದ್ದರು.
ನವರಾತ್ರಿಯ ದಿನಗಳಲ್ಲಿ ಕಟೀಲು ದೇಗುಲದಲ್ಲಿ ನಡೆದ ಒಟ್ಟು ಹೂವಿನ ಪೂಜೆಗಳ ಸಂಖ್ಯೆ ೨೯,೯೦೩!ಒಂದೂವರೆ ಲಕ್ಷ ಮಂದಿ ಅನ್ನಪ್ರಾಸಾದ ಸ್ವೀಕರಿಸಿದ್ದಾರೆ.

ಭ್ರಮರವಾಣಿ, ಹೊಲಿಗೆ ಯಂತ್ರಗಳ ಉದ್ಘಾಟನೆ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಪ್ರೌಢಶಾಲೆಯಲ್ಲಿ ಶಾಲಾ ವಿಶೇಷಾಂಕ ಭ್ರಮರವಾಣಿಯ ಬಿಡುಗಡೆ ಬುಧವಾರ ನಡೆಯಿತು. ಇದೇ ಸಂದರ್ಭ ಸಂಜೀವನಿ ಟ್ರಸ್ಟ್‌ನ ಡಾ. ಸುರೇಶ್ ರಾವ್ ಕೊಡುಗೆಯಾಗಿ ನೀಡಿದ ಹತ್ತು ಹೊಲಿಗೆ ಯಂತ್ರಗಳು, ವಾಸುದೇವ ಆಸ್ರಣ್ಣ ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ಯೋಜನೆ, ಹಳೆ ವಿದ್ಯಾರ್ಥಿ ಸಂಘ ನಡೆಸುವ ಯೋಗ ತರಗತಿಗಳನ್ನು ಉದ್ಘಾಟಿಸಲಾಯಿತು. ಡಾ. ಸುರೇಶ್ ರಾವ್, ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಹಳೆವಿದ್ಯಾರ್ಥಿ ಸಂಘದ ಶ್ರೀಹರಿನಾರಾಯಣದಾಸ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಬಾಬು ಶೆಟ್ಟಿ ಮರವೂರುಬೀಡು, ಮೂಲ್ಕಿ ಬಂಟರ ಸಂಘದ ಸಂತೋಷ್ ಹೆಗ್ಡೆ, ಬಾಲಕೃಷ್ಣ ಶೆಟ್ಟಿಗಾರ್, ಉಪಪ್ರಾಚಾರ್ಯ ಸುರೇಶ್ ಭಟ್, ಸಾಯಿನಾಥ ಶೆಟ್ಟಿ, ಕೆ.ವಿ.ಶೆಟ್ಟಿ, ಅಲೆಕ್ಸ್ ತಾವ್ರೋ, ಮಾಲತಿ ಮತ್ತಿತರರಿದ್ದರು.



Tuesday, October 23, 2012

ಶ್ರೀಮತಿ ಸುನೀತಾ ಎಚ್.ಬಿ. ಡಾಕ್ಟರೇಟ್ ಪದವಿ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಕಿನ ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುನೀತಾ ಎಚ್.ಬಿ. ಇವರು ಮಂಡಿಸಿದ ಕಾತ್ಯಾಯಿನೀ ಕೀ ಕವಿತಾವೋಂ ಮೇ ನಾರೀ ಎಂಬ ಮಹಾಪ್ರಬಂಧಕ್ಕೆ ಚೆನ್ನೈನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

katil shri durga makkala mela varshikotsva





Tuesday, October 16, 2012

ಕಟೀಲು: ನವರಾತ್ರಿ ಮಹೋತ್ಸವ, ಸಾಂಸ್ಕ್ರತಿಕ ಉತ್ಸವ ಆರಂಭ



ಕಟೀಲು : ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಯಕ್ಷಗಾನ ಕಾರ‍್ಯಕ್ರಮಗಳು ಮಂಗಳವಾರ ಆರಂಭಗೊಂಡವು. ಬೆಳಿಗ್ಗೆ ವಾಸುದೇವ ಆಸ್ರಣ್ಣ ಕಾರ‍್ಯಕ್ರಮ ಉದ್ಘಾಟಿಸಿದರು. ಚಂದ್ರಕಾಂತ ನಾಯಕ್, ವಿಶ್ವೇಶ ರಾವ್ ಮತ್ತಿತರರಿದ್ದರು.
ಸರಸ್ವತೀ ಸದನದಲ್ಲಿ ಡಾ| ಸುಶೀಲಾ ರಾವ್ ಕೊಲ್ಲಿಪಾಲ್ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಜರಗಿತು.
ದೇಗುಲಕ್ಕೆ ಮುಂಬಾಯಿ ಉದ್ಯಮಿ ಸುಧಾಕರ ಶೆಟ್ಟಿ ದೇವಳದ ಗರ್ಭ ಗುಡಿಯ ತೆಂಕು-ಬಡಗು ದಿಕ್ಕಿನ ಬಾಗಿಲಿಗೆ ೯.೫ ಕೆ.ಜಿ ತೂಕದ ಸುಮಾರು ಮೌಲ್ಯದ ಬೆಳ್ಳಿಯನ್ನು ಸೇವಾ ರೂಪದಲ್ಲಿ ಸರ್ಮಪಿಸಿದರು.


ನೆಲ್ಲಿತೀರ್ಥ ಗುಹಾಪ್ರವೇಶ ಆರಂಭ



ಕಟೀಲು : ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಕ್ಷೇತ್ರದ ಗುಹಾಲಯದಲ್ಲಿ ಗುಹಾ ಪ್ರವೇಶ ಹಾಗೂ ತೀರ್ಥ ಸ್ನಾನ ಮಂಗಳವಾರ ಆರಂಭಗೊಂಡಿತು.
ಪ್ರವೇಶೋತ್ಸವ ಪ್ರಯುಕ್ತ ಸಾಮೂಹಿಕ ಶನಿಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ದೀಪಾರಾಧನೆ, ರಂಗಪೂಜೆ ಜರಗಿತು. ಗುಹಾಪ್ರವೇಶ-ಗುಹಾತೀರ್ಥಸ್ನಾನ ಅ. ೧೬ರಿಂದ ಆರಂಭಗೊಂಡು ಎಪ್ರಿಲ್ ತಿಂಗಳ ಸಂಕ್ರಮಣದವರೆಗೂ ಪ್ರತಿದಿನ ಬೆಳಿಗ್ಗೆ ೬ರಿಂದ ಮಧ್ಯಾಹ್ನ ೧ರವರೆಗೆ ನಡೆಯುತ್ತದೆ.

Wednesday, October 10, 2012

ಕಟೀಲಿನಲ್ಲಿ ತಾಳಮದ್ದಲೆ ಸಪ್ತಾಹ ಉದ್ಘಾಟನೆ

ಕಟೀಲು ಶ್ರೀ ದುಗಾಱಪರಮೇಶ್ವರೀ ದೇಗುಲದಿಂದ ನಡೆಯುವ ಯಕ್ಷಗಾನ ತಾಳಮದ್ದಲೆ ಸಪ್ತಾಹ ಗುರುರೇವ ಜಗತ್ಸರ್ವಂ ಅಕ್ಟೋಬರ್ .9ರಂದು ಉದ್ಘಾಟನೆಗೊಂಡಿತು. ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಪ್ರಭಾಕರ ಜೋಷಿ, ಪ್ರಾಯೋಜಕರು ಮುಂತಾದವರಿದ್ದರು.