Thursday, April 19, 2012

katil jatre hagalu ratotsava 2012



ಅಬ್ಬರದ ಮಳೆಯಲ್ಲೇ ವೈಭವದ ಕಟೀಲು ಜಾತ್ರೆ ’ಧೋ’ ಎಂದು ಸುರಿದ ಗಾಳಿ ಮಳೆಯ ಮಧ್ಯೆಯೇ ಶುಕ್ರವಾರ ರಾತ್ರಿ ನೂರಾರು ಮಂದಿ ತೇರನ್ನೆಳೆದು ಕಟೀಲು ಶ್ರೀ ಭ್ರಾಮರಿಯ ರಥೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭ ದೇಗುಲದ ಆಡಳಿತಾಧಿಕಾರಿ ವೆಂಕಟೇಶ್, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಜಿ.ಪಂ.ಸದಸ್ಯ ಈಶ್ವರ್, ಭಾಸ್ಕರಾನಂದ ಕುಮಾರ್, ಮೋನಪ್ಪ ಶೆಟ್ಟಿ ಉಪಸ್ಥಿತಿಯಲ್ಲಿ ಕಟೀಲಿನಲ್ಲಿ ದೇಗುಲದ ವತಿಯಿಂದ ಸುಮಾರು ಹದಿನೈದು ಲಕ್ಷ ರೂ.ವೆಚ್ಚದಲ್ಲಿ ಮಾಡಲಾದ ಇಂಟರ್‌ಲಾಕ್ ಅಳವಡಿಸಿದ ನೂತನ ಬಸ್‌ನಿಲ್ದಾಣದ ಉದ್ಘಾಟನೆ ನಡೆಯಿತು. ವಿಜಯಾ ಬ್ಯಾಂಕ್ ಪ್ರಾಯೋಜಕತ್ವದ ಲೇಸರ್ ಶೋ, ಸುಮನಸಾ ಕಲಾವಿದರ ಭೀಷ್ಮನ ಕಡೆತ ದಿನಕುಲು ನಾಟಕ, ಹಾಗೂ ಕೊಪ್ಪಳದ ಮಾರಪ್ಪ ದಾಸರಿಂದ ಜನಪದ ಗೀತೆಗಳು ನಡೆಯಿತು. ಶುಕ್ರವಾರ ಸಂಜೆ ಎಕ್ಕಾರುವರೆಗೆ ವೈಭವದ ಮೆರವಣಿಗೆಯಲ್ಲಿ ಚಿನ್ನದ ಪಾಲ್ಲಕ್ಕಿಯಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವರ ಉತ್ಸವ ಮೂರ್ತಿಯನ್ನು ಕೊಂಡೊಯ್ಯಲಾಯಿತು. ದಾರಿಯುದ್ಧಕ್ಕೂ ಭಕ್ತರ ಕಟ್ಟೆಪೂಜೆಗಳನ್ನು ಸ್ವೀಕರಿಸಿ ಕಟೀಲಿಗೆ ವಾಪಾಸಾದ ಶ್ರೀ ದೇವೀ ಮತ್ತು ಶಿಬರೂರು ಕೊಡಮಣಿತ್ತಾಯ ದೈವದ ಭೇಟಿಯ ಬಳಿಕ ರಾತ್ರಿ ಎರಡು ಗಂಟೆಯ ಸುಮಾರಿಗೆ ರಥಬೀದಿಗೆ ಬರುತ್ತಿದ್ದಂತೆ ಭರ್ಜರಿ ಮಳೆಯಾಯಿತು. ಅರ್ಧ ಗಂಟೆಯ ಕಾಲ ಸುರಿದ ಮಳೆಯ ಮಧ್ಯೆಯೇ ದೇವರ ರಥದ ಎದುರಿನ ಬಲಿಯನ್ನು ಕಡಿತಗೊಳಿಸಿ, ನೇರ ರಥಾರೋಹಣಗೈಯಲಾಯಿತು. ಮಳೆ ನಿಂತ ಬಳಿಕ ನೂರಾರು ಮಂದಿ ರಥ ಎಳೆದು ಸಂಭ್ರಮಿಸಿದರು. ಬಳಿಕ ಸಿಡಿಮದ್ದು ಪ್ರದರ್ಶನ ನಡೆಯಿತು. ಶ್ರೀ ದೇವರ ಜಳಕದ ಬಳಿಕ ಬೆಳಿಗ್ಗೆ ಅತ್ತೂರು ಕೊಡೆತ್ತೂರಿನ ಇನ್ನೂರರಷ್ಟು ಹರಕೆಯ ಸೇವಾ ಕರ್ತರು ಅಜಾರು ಮತ್ತು ಕಟೀಲು ರಥಬೀದಿಯಲ್ಲಿ ಸೂಟೆದಾರ ಸೇವೆಯಲ್ಲಿ ಪಾಲ್ಗೊಂಡರು.

Tuesday, April 17, 2012

ತಾ.೨೩ರಿಂದ ಕಟೀಲಿನಲ್ಲಿ ವಸಂತವೇದ ಶಿಬಿರ

ಕಟೀಲು : ಇಲ್ಲಿನ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ಮುಂಬೈನ ಸಂಜೀವನೀ ಟ್ರಸ್ಟ್ ನಡೆಸುವ ಒಂದು ತಿಂಗಳ ಕಾಲದ ವಸಂತವೇದ ಶಿಬಿರ ತಾ.೨೩ರಂದು ಉದ್ಘಾಟನೆಗೊಳ್ಳಲಿದೆ.

ಕಟೀಲು ಕಾಲೇಜಿಗೆ ಎಂಆರ್‌ಪಿಎಲ್‌ನಿಂದ ೧೦ಲಕ್ಷ ರೂ.


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿಗೆ ಕಂಪ್ಯೂಟರ್‌ಗಳ ಅಳವಡಿಕೆಗೆ ಎಂ.ಆರ್.ಪಿ.ಎಲ್. ರೂ. ಹತ್ತು ಲಕ್ಷವನ್ನು ನೀಡಿದೆ. ಚೆಕ್‌ನ್ನು ಎಂಆರ್‌ಪಿಎಲ್‌ನ ಲಕ್ಷ್ಮೀ ಕುಮಾರನ್ ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿಯವರಿಗೆ ಹಸ್ತಾಂತರಿಸಿದರು. ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ದೇಗುಲದ ಪ್ರಬಂಧಕ ವಿಶ್ವೇಶ ರಾವ್ ಉಪಸ್ಥಿತರಿದ್ದರು.

Friday, April 13, 2012

ಕಟೀಲಿನಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳು

ಕಟೀಲು : ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಉತ್ಸವಾಂಗ ದಿನಂಪ್ರತಿ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯಲಿವೆ. ತಾ.೧೪ರಂದು ಶ್ರೀನಿವಾಸ ಆಚಾರ್ಯ ಬಳಗ ತೋಕೂರು, ಹಳೆಂಯಗಡಿ ಇವರಿಂದ ಭಜನೆ, ಸಂಜೆ ತಾಳಮದ್ದಲೆ ’ರಾವಣಾಂತರಂಗ’ ಯಕ್ಷ ಸಿಂಧೂರ, ಮಹಿಳಾ ಯಕ್ಷಗಾನ ಕೂಟ, ತಲಪಾಡಿ ಇವರಿಂದ. ತಾ. ೧೫ ಶ್ರೀ ವಾಗ್ದೇವಿ ಭಜನಾ ಮಂಡಳಿ ಕಿನ್ನಿಗೋಳಿಯವರಿಂದ ಭಜನೆ ಸಂಜೆ, ಕು| ದೀಕ್ಷಾ. ಕೆ. ಕೊಟ್ಟಾರ ಇವರಿಂದ ಭರತನಾಟ್ಯ, ತಾ. ೧೬ಕ್ಕೆ ಭಜನೆ ಸಂಗೀತ ಶಾಲೆ, ಕಿನ್ನಿಗೋಳಿ ಮಕ್ಕಳಿಂದ, ಸಂಜೆ ’ಭರತನಾಟ್ಯ’ ಶ್ರೀ ಗುರುದೇವ ಲಲಿತಾ ಕಲಾ ಅಕಾಡೆಮಿ, ಮಂಡ್ಯದವರಿಂದ. ತಾ. ೧೭ ಸಂಜೆ ಬೆಳ್ಳಿ ರಥೋತ್ಸವ ಬೆಳಿಗ್ಗೆ ಶ್ರೀ ಭ್ರಾಮರೀ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ’ರಸಮಂಜರಿ’ ಕರಾವಳಿ ಮೆಲೋಡೀಸ್ ಮಂಗಳೂರು ಇವರಿಂದ ನಡೆಯಲಿದೆ. ತಾ.೧೮ಕ್ಕೆ ಶ್ರೀ ದೇವಿ ಭಜನಾ ಮಂಡಳಿ ಕಟೀಲು ಇವರಿಂದ ಭಜನೆ, ಸಂಜೆ ’ನೃತ್ಯ ಕಾರ್ಯಕ್ರಮ’ ಡ್ಯಾನ್ಸಿಂಗ್ ಸ್ಟಾರ‍್ಸ್ ಅತ್ತಾವರದವರಿಂದ ಇದೆ. ತಾ. ೧೯ರಂದು ಹಗಲು ರಥೋತ್ಸವ ಬೆಳಿಗ್ಗೆ ಭಜನೆ ಬಾಲಗೋಪಾಲ ತಂಡದಿಂದ, ಸಂಜೆ ’ಯಕ್ಷಗಾನ ಪ್ರದರ್ಶನ’ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ’ಶಿವಭಕ್ತ ವೀರಮಣಿ’ ಪ್ರದರ್ಶನಗೊಳ್ಳಲಿದೆ. ತಾ. ೨೦ರಂದು ದಿನ ಆರಟ ಬೆಳಿಗ್ಗೆ ಭಕ್ತಿ ಗಾಯನ-ಗಜಲ್ ವೈಶಾಲಿ ಪಾಟೀಲ ಮತ್ತು ಬಳಗದವರಿಂದ ಸಂಜೆ ೭.೩೦ರಿಂದ ’ಲೇಸರ್ ಶೋ’ ವಿಜಯಾ ಬ್ಯಾಂಕಿನ ಪ್ರಯೋಜಕತ್ವದಲ್ಲಿ ನಡೆಯಲಿದೆ. ರಾತ್ರಿ ೮.೦೦ರಿಂದ ’ಭೀಷ್ಮನ ಕಡೆತ ದಿನೊಕುಲು’ ನಾಟಕ ಸುಮನಸಾ ಸಾಂಸ್ಕೃತಿಕ ಸೇವಾ ಸಂಘಟನೆ ಕೊಡವೂರು ಇವರಿಂದ ಪ್ರದರ್ಶನಗೊಳ್ಳಲಿದೆ. ರಾತ್ರಿ ೧೦.೦೦ರಿಂದ ತತ್ವಪದ-ಜಾನಪದ ಮಾರಪ್ಪ ಮಾರಪ್ಪ ಚೆನ್ನದಾಸರ ಕೊಪ್ಪಳ ಇವರಿಂದ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಜರಗಲಿದೆ.