Monday, March 28, 2011

ಶಿಲ್ಪಾ ಶೆಟ್ಟಿ ರಾಜ್ ಕುಂದ್ರ ಭೇಟಿ







ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಸೋಮವಾರ ಹಿಂದಿ ಚಿತ್ರ ನಟಿ ಶಿಲ್ಪಾ ಶೆಟ್ಟಿ ತನ್ನ ಪತಿ ರಾಜ್ ಕುಂದ್ರ ಹಾಗೂ ತಾಯಿ ಸುನಂದಾ ಶೆಟ್ಟಿಯೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಬಳಿಕ ನಿಡ್ಡೋಡಿ ಮುದಲಾಡಿಯ ಮೂಲ ಮನೆಗೆ ಹೋಗಿ ಅಲ್ಲಿ ದೈವ, ನಾಗದೇವರಿಗೆ, ಮನೆ ದೇವರಿಗೆ ವಂದಿಸಿ, ಮನೆಯಲ್ಲಿ ಊಟ ಮಾಡಿ ಹಿಂತಿರುಗಿದರು.

ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ ಉಪಸ್ಥಿತರಿದ್ದರು.

Saturday, March 26, 2011

ವಾರ್ಷಿಕೋತ್ಸವ

ಯಾವುದೇ ಕ್ಷೇತ್ರದಲ್ಲಿ ಕಾರ್‍ಯನಿರ್ವಹಿಸುವ ಮಹಿಳೆಯರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಉದ್ಯೋಗಾವಕಾಶಗಳು ಹೆಚ್ಚಿವೆ. ವಿದ್ಯಾರ್ಥಿನಿಯರು ಶಿಕ್ಷಣದ ಅವಕಾಶಗಳನ್ನು ಸದುಪಯೋಗಪಡಿಸಬೇಕು ಎಂದು ಮಂಗಳೂರು ವಿವಿಯ ಉಪನ್ಯಾಸಕಿ ವಿಜಯಲಕ್ಷ್ಮೀ ಕೆ.ಕೆ. ಹೇಳಿದರು.
ಅವರು ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ವಿವಿ ಮಟ್ಟದ ಯಕ್ಷಗಾನ ಸ್ಪರ್ಧೆಗಳಲ್ಲಿ ವಿಜೇತವಾದ ಕಾಲೇಜಿನ ಯಕ್ಷಗಾನ ತಂಡದ ಸದಸ್ಯರನ್ನು, ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು, ಎಂಬಿಎಯಲ್ಲಿ ೭ನೇ ರ್‍ಯಾಂಕ್ ಪಡೆದ ಉಪನ್ಯಾಸಕ ವಿಜಯ್‌ರನ್ನು ಸಂಮಾನಿಸಲಾಯಿತು.
ದೇಗುಲದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಕೊಡೆತ್ತೂರು ವೇದವ್ಯಾಸ ಉಡುಪ, ವಿದ್ಯಾರ್ಥಿ ನಾಯಕರಾದ ವಿಷ್ಣುಪ್ರಸಾದ್, ವಿಶ್ವೇಶ, ತುಷಾರ್, ಪ್ರಣೀತಾ ಮತ್ತಿತರರಿದ್ದರು. ಉಪನ್ಯಾಸಕ ಸುರೇಶ್ ಸ್ವಾಗತಿಸಿದರು. ಪ್ರಾಚಾರ್‍ಯ ಎಂ. ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದರು. ಸೋಂದಾ ಭಾಸ್ಕರ ಭಟ್ ವಂದಿಸಿದರು. ಪರಮೇಶ್ವರ ಸಿ.ಎಚ್. ಕಾರ್‍ಯಕ್ರಮ ನಿರೂಪಿಸಿದರು.

Wednesday, March 16, 2011

ಕಟೀಲು ದೇಗುಲದ ವಸಂತ ಮಂಟಪಕ್ಕೆ ಚಿನ್ನ ಬೆಳ್ಳಿಯ ಕುಸುರಿ

ಕಟೀಲು : ಪುರಾಣ ಪ್ರಸಿದ್ಧ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿರುವ ವಸಂತ ಮಂಟಪಕ್ಕೆ ಚಿನ್ನ ಬೆಳ್ಳಿಯಿಂದ ಅಲಂಕೃತ ಕುಸುರಿ ಕೆಲಸವನ್ನು ಮಾಡಲಾಗಿದ್ದು, ತಾ. ೧೮ರ ಶುಕ್ರವಾರ ಶ್ರೀ ದೇವಿಗೆ ಸಮರ್ಪಿಸಲಾಗುವುದು ಎಂದು ದಾನಿ ಪೋಪ್ಯುಲರ್ ಜಗದೀಶ ಸಿ.ಶೆಟ್ಟಿ ಹೇಳಿದರು.
ಅವರು ಬುಧವಾರ ಕಟೀಲು ದೇಗುಲದಲ್ಲಿ ಕರೆದ ಸುದ್ಧಿಗೋಷ್ಟಿಯಲ್ಲಿ ವಿವರ ನೀಡಿದರು.
ವಸಂತ ಮಂಟಪಕ್ಕೆ ೧೯೮೬ರಲ್ಲಿ ಕನ್ನಡಿಗಳಿಮದ ಅಲಂಕರಿಸಿ ಗ್ಲಾಸ್ ಹೌಸ್ ಸೇವೆ ನೀಡಿದ್ದು, ಇದೀಗ ಅದೇ ಮಂಟಪಕ್ಕೆ ೫೦ಕೆಜಿ ಬೆಳ್ಳಿ, ೧೦ಕೆಜಿ ಜರ್ಮನ್ ಬೆಳ್ಳಿ, ೨೦೦ಗ್ರಾಂ. ಚಿನ್ನದಿಂದ ನಿರ್ಮಿಸಲಾಗಿದೆ. ಬೆಳ್ಳಿಯಿಂದ ವಸಂತ ಮಂಟಪ ಪೀಠಗಳನ್ನು ಅಲಂಕರಿಸಲಾಗಿದ್ದು, ನವಿಲುಗಳು, ಪಾರ್ಥಸಾರಥಿ ಕುಸುರಿ ಕೆಲಸ ಆಕರ್ಷಣೀಯವಾಗಿದೆ. ಮಂಟಪದೊಳಗೆ ಶ್ರೀ ದೇವಿ ಬಿಂಬವನ್ನು ಚಿನ್ನದ ಲೇಪನದಲ್ಲಿ ಮಾಡಲಾಗಿದ್ದು, ವಜ್ರದ ಮೂಗುತಿಯಿಂದ ಅಲಂಕರಿಸಲಾಗಿದೆ. ತಾ.೧೮ರ ಸಂಜೆ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥರು ಶ್ರೀ ದೇವಿಗೆ ಸಮರ್ಪಿಸಲಿದ್ದಾರೆ. ಹಯಗ್ರೀವ ತಂತ್ರಿ, ವೇದವ್ಯಾಸ ತಂತ್ರಿ, ದೇಗುಲದ ಅರ್ಚಕರಾದ ಆಸ್ರಣ್ಣ ಬಂಧುಗಳು ಭಾಗವಹಿಸಲಿದ್ದಾರೆ ಎಂದು ಜಗದೀಶ ಶೆಟ್ಟಿ ತಿಳಿಸಿದರು.
ಕಟೀಲು ದೇಗುಲಕ್ಕೆ ಈಗಾಗಲೇ ಜಗದೀಶ ಶೆಟ್ಟರು ದೇವಿಯ ರತ್ನಾಭರಣ ಇಡುವ ಟ್ರೆಜರಿಯನ್ನು ನೀಡಿದ್ದು, ಮುಂಬೈಯಲ್ಲಿ ಹೋಟೇಲು ಉದ್ಯಮಿಯಾಗಿದ್ದು, ಮರವೂರಿನಲ್ಲಿ ಪಾಪ್ಯುಲರ್ ಎಜುಕೇಶನ್ ಸೆಂಟರ್‌ನ ಸ್ಥಾಪಕರೂ ಆಗಿದ್ದಾರೆ. ಅಲ್ಲದೆ ಕಟೀಲು ಯಕ್ಷಗಾನ ಮೇಳಗಳಿಗೆ ಸಹಕಾರ ನೀಡುತ್ತಿರುವ ಯಕ್ಷಧರ್ಮಬೋಧಿನಿ ಟ್ರಸ್ಟ್‌ನ ನಿರ್ದೇಶಕರಲ್ಲೊಬ್ಬರಾಗಿದ್ದಾರೆ ಎಂದು ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ವಸಂತ ಮಂಟಪದಲ್ಲಿ ವೈಶಾಖ ಮಾಸದ ಒಂದು ತಿಂಗಳ ಕಾಲ ವಸಂತ ಪೂಜೆಯಲ್ಲಿ ಹಾಗೂ ಉತ್ಸವದ ಸಂದರ್ಭ ಎಂಟು ದಿನಗಳ ಕಾಲ ಶ್ರೀ ಭ್ರಾಮರೀಯ ಉತ್ಸವ ಮೂರ್ತಿಯನ್ನಿಟ್ಟು ಪೂಜೆ ನಡೆಯುತ್ತದೆ.
ಸುದ್ದಿಗೋಷ್ಟಿಯಲ್ಲಿ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಉಮೇಶ ರಾವ್ ಎಕ್ಕಾರು, ದೀಪಕ್ ಶೆಟ್ಟಿ, ಸುನೇತ್ರ ಶೆಟ್ಟಿ, ಪ್ರಭಾಕರ ಆಚಾರ್‍ ಮತ್ತಿತರರಿದ್ದರು.

Tuesday, March 15, 2011

ಕದ್ರಿ ಗೋಪಾಲನಾಥರಿಂದ ಸ್ಯಾಕ್ಸೋಫೋನ್ ವಾದನ



ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪದ್ಮಶ್ರೀ ಕದ್ರಿ ಗೋಪಾಲನಾಥರಿಂದ ಸ್ಯಾಕ್ಸೋಫೋನ್ ವಾದನ ಸೇವೆ ನಡೆಯಿತು.


Monday, March 14, 2011

ಕಟೀಲ್ ಟ್ರೋಫಿ


ಕಟೀಲಿನಲ್ಲಿ ಸ್ಥಳೀಯ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ಆಯೋಜಿಸಿದ ಕ್ರಿಕೆಟ್ ಟೂರ್ನಿಯಲ್ಲಿ ಕಟೀಲ್ ಟ್ರೋಫಿ ಹಾಗೂ ನಗದು ಬಹುಮಾನವನ್ನು ಮೂಡುಬಿದ್ರೆಯ ನಜ್ಮಾ ತಂಡ ದ್ವಿತೀಯ ಪ್ರಶಸ್ತಿಯನ್ನು ಕುಳಾಯಿಯ ಅಜಯ್ ಸ್ಪೋರ್ಟ್ಸ್ ಪಡೆದವು. ಮೂಡುಬಿದ್ರೆಯ ವಿಜೇತ್ ಸರಣಿಶ್ರೇಷ್ಟ ಬಹುಮಾನ ಪಡೆದರು. ಗಿರೀಶ್ ಶೆಟ್ಟಿ, ಪ್ರವೀಣ್, ಐವನ್ ಡಿಸೋಜ, ವೆಂಕಟರಮಣ ಮಯ್ಯ, ದಾಮೋದರ ಆಚಾರ್‍ಯ, ಕೇಶವ್, ಚಂದ್ರಹಾಸ್, ದೇವೀಪ್ರಸಾದ್ ಬಿ. ಉಪಸ್ಥಿತರಿದ್ದರು.

ಅರಸು ಕುಂಜರಾಯ ನೇಮ




ಕಟೀಲಲು ಕೊಡೆತ್ತೂರಿನ ಅರಸು ಕುಂಜರಾಯ ದೈವಸ್ಥಾನದಲ್ಲಿ ನೇಮ ನಡೆಯಿತು